Thursday, September 28, 2006

ಅಪ್ಪಟ ಕನ್ನಡ ನೆಲ 'ಬೆಳಗಾವಿ'

ಎಮ್.ಈ.ಎಸ್ ಎಂಬ ಪಾರಟಿಯವರು ಹಬ್ಬಿಸಲು ನೋಡುತ್ತಿರುವುದೇನೆಂದರೆ ಬೆಳಗಾವಿ ಮೊದಲಿಂದಲು ಮರಾಟಿಗರದು, ಅಲ್ಲಿ ಮೊದಲಿಂದಲೂ ಮರಾಟಿಗರು ನೆಲೆಸಿದ್ದರೆಂದು. ಅಪ್ಪಟ ಸುಳ್ಳು ಹೇಳಿಕೊಂಡು ಮಂದಿಯನ್ನು ನಂಬಿಸಿ, ಅನ್ನೆದಿಂದ ಬೆಳಗಾವಿಯನ್ನು ಮಹಾರಾಸ್‍ಟ‍ರಕ್ಕೆ ಸೇರಿಸಲು ನೋಡುತ್ತಿದ್ದಾರೆ.

http://www.dailypioneer.com/indexn12.asp?main_variable=VOTE_2004&file_name=vote364.txt&counter_img=364

ಮೇಲಿನ ಕೊಂಡಿಯಂತೆ ಬೆಳಗಾವಿಯಿಂದ ಬರೀ ಹತ್ತೇ ಕಿಲೋಮೀಟರ್ ಇರುವ 'ಯಲ್ಲೂರು' ಎಂಬಲ್ಲಿ ಸೇ ೯೫% ಮಂದಿ ಮರಾಟಿಯವರಂತೆ. ಇದಕ್ಕೆ ಕಾರಣ ಮರಾಟಿಗರ ದಬ್ಬಾಳಿಕೆ. ಯಲ್ಲೂರು ಇದು ಅಪ್ಪಟ ಕನ್ನಡ ಊರಿನ ಹೆಸರು, ಅಲ್ಲಿರುವ ೯೫% ಸೇಕಡಾ ಮಂದಿ ಮರಾಟಿಯಂತೆ ಎಂತ ನೋವಿನ ಸಂಗತಿಯಲ್ಲವೇ?
ಕರುನಾಡಿಂದ ಮೀರಜಿಗೆ ಬಹಳ ಕನ್ನಡಿಗರು ಆರೋಗ್ಗೆ ತಪಾಸಣೆಗಾಗಿ ತೆರಳುತ್ತಾರೆ, ಅಲ್ಲಿ ಕನ್ನಡಿಗರನ್ನು ಸರಿಯಾಗಿ ಕಾಣುವುದಿಲ್ಲ.

"ಬೆಳಗಾವಿ" ಇದು ಕೂಡ ಅಪ್ಪಟ ಕನ್ನಡ ಪದ. "ಬೆಳ" ಎಂದರೆ ಬಿಳಿ. ಬೆಳ್ಳಕ್ಕಿ ಪದ ನೋಡಿ. ಬೆಳ್ಳನೆ ಹಕ್ಕಿ = ಬೆಳ್ಳಕ್ಕಿ
ಬೆಳಗೊಳ, ಬೆಳಗಲಿ ಇತರ ಮಾದರಿಗಳು. ಎರಡನೆಯದು "ಗಾವಿ". http://kannadakasturi.com ಇಲ್ಲಿ ಕೊಟ್ಟಿರುವಂತೆ "ಗಾವಿಲ" ಅಂದರೆ ಹಳ್ಳಿಯವ. "ಗಾವಿ" ಎಂದರೆ ಹಳ್ಳಿ. ಹಾಗಾಗಿ 'ಬೆಳಗಾವಿ' ಎಂದರೆ 'ಬಿಳಿಹಳ್ಳಿ'. ಒಂದು ಕಾಲದಲ್ಲಿ ಇದು ಬಿಳಿ ಮಲ್ಲಿಗೆಗೆ ಹೆಸರುವಾಸಿಯಾಗಿದ್ದರಿಂದ ಈ ಹೆಸರು ಬಂದಿರಬೇಕು.
ಇತರ ಮಾದರಿಗಳು ಸೊರಗಾವಿ, ಸಿಗ್ಗಾವಿ.

ಈ ಬಗ್ಗೆ ಇಲ್ಲಿ ಮಾತುಕತೆಯಿದೆ ನೋಡಿ

http://listserv.linguistlist.org/cgi-bin/wa?A2=ind9805&L=indology&D=0&P=7931&F=P

ಅಪ್ಪಟ ಕನ್ನಡ ನಾಡು ಬೆಳಗಾವಿ ಅದು ಎಂದಿದ್ದರೂ ಕರುನಾಡಿಗೆ ಸೇರಬೇಕು.

Thursday, September 14, 2006

ಇಸುವಿನ ಬಳಕೆಯ ಬಗ್ಗೆ

ಇದು ಇನ್ನೂ ಮುಕ್ಕೆಯಾದ ಇಚಾರ

ಕನ್ನಡದಲ್ಲಿ 'ಇಸು' ವಿನ ಬಳಕೆ ಹೀಗಿದೆ,
ಮಾಡು - ನಾನು ಮಾಡುವುದು.
ಮಾಡಿಸು - ಎರಡನೆಯವರು ಮಾಡುವಂತೆ ಮಾಡುವುದು.
ಮಾಡಿಸಿಸು - ಎರಡನೆಯವರು ಮೂರನೆಯವರಿಂದ ಮಾಡಿಸುವಂತೆ ಮಾಡುವುದು.
ಇದರಿಂದ ನಮಗೆ ಮೂರು ಹೆಸರುಪದಳು ಸಿಗುತ್ತವೆ. ಮಾಡುವಿಕೆ,ಮಾಡಿಸುವಿಕೆ,ಮಾಡಿಸಿಸುವಿಕೆ.
ಹಾಗೆಯೇ,
ಕೇಳು - ಮೊದಲ ಪುರುಸ ಕೇಳುವುದು. ಮಾದರಿ: ನಾನು ಗುರುಗಳನ್ನು ಕೇಳಿದೆನು
ಕೇಳಿಸು - ಎರಡನೆಯವರು ಕೇಳುವಂತೆ ಮಾಡುವುದು ;ನಾನು ರವಿಯ ಕಡೆಯಿಂದ ಗುರುಗಳನ್ನು ಕೇಳಿಸಿದೆನು
ಕೇಳಿಸಿಸು - ಎರಡನೆಯವರು ಮೂರನೆಯವರಿಂದ ಕೇಳಿಸುವಂತೆ ಮಾಡುವುದು. ;ನಾನು ರವಿಗೆ ಹೇಳಿ, ರಾಮನ ಕಡೆಯಿಂದ ಗುರುಗಳನ್ನು ಕೇಳಿಸಿಸಿದೆನು.
'ಪ್ರಶ್ನೆ' ಈ ಪದವು ಸಕ್ಕದದ 'ಪ್ರಶ್ನಾ' ದಿಂದ ಬಂದದ್ದು. ಇದಕ್ಕೆ ಇಸು ಸೇರಿಸಿ 'ಪ್ರಶ್ನಿಸು' ಮಾಡಿದ್ದೇವೆ.
ಕೇಳು - ಪ್ರಶ್ನೆ ಮಾಡು - ಪ್ರಶ್ನಿಸು
ಕೇಳಿಸು - ಪ್ರಶ್ನಿಸಿಸು.
ಕೇಳಿಸಿಸು - ?
ಕೇಳು ಎಂಬ ಪದವನ್ನು ಬಿಟ್ಟು ನಾವು 'ಪ್ರಶ್ನಿಸು' ಎಂದು ಬಳಕೆ ಮಾಡುತ್ತಾ ಹೋದರೆ, ಕೇಳಿಸಿಸು ಎಂಬ ಪದ ತನ್ನ ತಿಳಿವನ್ನು ಕಳೆದುಕೊಂಡು ಸಾಯುತ್ತದೆ. ಇದರಿಂದ ಸರಳವಾಗಿ ಹೇಳಬಹುದಾದನ್ನು ಕನ್ನಡದಲ್ಲಿ ಹೇಳಲು ಕಟಿಣವಾಗಿ ತೋರತೊಡಗುತ್ತದೆ.ಹೀಗೆಯೇ ಏಸೋ ಪದಗಳು ಕಳೆದೇ ಹೋಗಿವೆ. ಪದಗಳು ಕಳೆಯತೊಡಗಿದರೆ ನುಡಿಯೂ ಕಳೆಯತೊಡಗಿದಂತೆಯೇ.
ಸಕ್ಕದವು ತೇಟ್ ಈಗ ಇಂಗಲೀಸು ಸೇರಿಕೊಳ್ಳುತ್ತಿರುವಂತೆಯೇ ಆಗ ಬರಹದಲ್ಲಿ ಸೇರಿಕೊಂಡಿರುವುದು ತಿಳಿಯುತ್ತದೆ.
ಅಪ್ಪಿಕೊ - ಆಲಿಂಗನ ಮಾಡು - ಆಲಿಂಗಿಸು - ಹಗ್(hug) ಮಾಡು - ಹಗ್ಗಿಸು?
'ಪ್ರಯತ್ನಿಸು' ಎಂಬುದಕ್ಕಿಂತ 'try ಮಾಡು' ಎಂಬುದೇ ಬೇಗರಣಬದ್ದವಾಗಿದೆ. ಇಲ್ಲವೇ ಕನ್ನಡದಲ್ಲಿಯೇ ಹೇಳಬೇಕೆಂದವರು "ಆಗುತ್ತಾದಾ ನೋಡಬೇಕು' ಇಲ್ಲವೇ 'ಗುದ್ದಾಡಬೇಕು' ಹೀಗೆ ಸರಿಯಾಗಿ ಆಡುತ್ತಾರೆ. ಇನ್ನು ಮೇಲಾದರೂ ಕನ್ನಡದಲ್ಲಿ ಸರಿಯಾಗಿ ಬರೆಯುವ ಮನಸ್ಸು ಬರಹಗಾರರಲ್ಲಿ ಮೂಡೀತೆ? ( ಪೇಪರಿನೋರು, ಕಾದಂಬರಿಕಾರರು, ಬಲಾಗಿಗಳು, ಕತೆಗಾರರು, ಟಿ.ವಿ.ಗಳಲ್ಲಿ ಸುದ್ದಿ ಓದುವವರು, ಮತ್ತು ಸರಿಯಾದ ಕನ್ನಡವನ್ನು ಬಳಕೆಗೆ ತರಬೇಕೆಂಬ ಹಂಬಲ ಇರುವವರು, ಸಕಲ ಕನ್ನಡಿಗರನ್ನೂ,ನನ್ನನ್ನೂ ಸೇರಿಸಿಕೊಂಡು).

Wednesday, September 06, 2006

ಬದುಕೆಂಬ ಬದುಕು

ಬದುಕೆಂಬ ಬದುಕಿದು ಐತಿ ಬಾsಳ ಸಣ್ಣದು
ಅದಕsನೋ ತಮ್ಮಾ ಆರಾsಮಿರೋ ತಿಮ್ಮಾ

ಇವೊತ್ತು ಜೋಳದ ರೊಟ್ಟಿ ಇಲ್ಲಂದರ
ಚಪಾತಿ ತಿಂದ ಆರಾsಮಿರು

ಗೆಳೆಯಾರಾರು ಸಿಗಲಿಲ್ಲಂದರ
ಟಿ.ವಿ. ನೋಡಕೊಂಡ್ ಆರಾsಮಿರು

ಜಿಮ್ಮಿಗೆ ಹೋಗುದಾಗಲಿಲ್ಲಂದರ
ಒಂದೆರಡ ಹೆಜ್ಜಿ ನಡsದ ಆರಾsಮಿರು

MBA ಮಾಡಬೇಕು ಅನ್ನಕೊಂಡಿದ್ದಿ
S/W ನಾಗs ಆರಾsಮಿರು

ಮನಿಗೆ ಹೋಗುದಾಗಲಿಲ್ಲಂದರ
ಪೋನಿನಾಗ ಮಾತಾಡಿ ಆರಾsಮಿರು

ಯಾರನೋ ನೋಡುದು ಆಗಲಿಲ್ಲಂದರ
ಅವರ ದನಿ ಕೇಳಿ ಆರಾsಮಿರು

ನಿನ್ನೆಂಬುದು ಕಳೆದು ಹೋಗೇತಿ
ಒಳ್ಳೆಯದರ ನೆನಪಿನಾsಗ ಆರಾsಮಿರು

ನಾಳೆ ಹೆಂಗೈತೋ ಗೊತ್ತಿಲ್ಲ
ಕನಸಿನಾಗs ಆರಾsಮಿರು

ನಿನ್ನೆ ನಾಳಿ ಚಿಂತಿ ಮರೆತು
ಇಂದಿನದೊಳಗs ಆರಾsಮಿರು

ಬದುಕೆಂಬ ಬದುಕಿದು ಐತಿ ಬಾsಳ ಸಣ್ಣದು
ಅದಕsನೋ ತಮ್ಮಾ ಆರಾsಮಿರೋ ತಿಮ್ಮಾ